ವಿವಿದ್ ಡ್ರೀಮ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಲ್ಲಿ ಸಾರಥಿ ಸತೀಶ, ದರ್ಶನ್ ಕೃಷ್ಣ, ಎಸ್.ಬಿ.ವಿನಯ್ ನಿರ್ಮಿಸುತ್ತಿರುವ ಹೆಚ್.ಎಂ.ಶ್ರೀನಂದನ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಸಾಹಸ ಕಲೆಯ ಹಿನ್ನೆಲೆ ಹೊಂದಿರುವ ಚಿತ್ರ ಲೀ ಬಿಡುಗಡೆಗೆ ಸಿದ್ದವಾಗಿದ್ದು ಇದೀಗ ಸೆನ್ಸಾರ್ ಮನೆಯ ಅಂಗಳದಲ್ಲಿದೆ. ಈ ಚಿತ್ರದಲ್ಲಿ ಉಷ್ ಎಂಬ ಕತೆಯನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದೆ. ಕನ್ನಡದಲ್ಲಿ ಈವರೆಗೂ ಯಾರೂ ಮಾಡಿರದಂಥ ಒಂದು ವಿಶಿಷ್ಟ ಪ್ರಯತ್ನವಾಗಿ ಲೀ ಮಾಡಿ ಬಂದಿದೆ.
ಚಿತ್ರಕ್ಕೆ ಗುರುಕಿರಣ್ ಆನಂದರಾಜ್ ವಿಕ್ರಮ್ ಸಂಗೀತ, ಎಂ.ಯು.ನಂದಕುಮಾರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ವಚನ ಶ್ರೀರಾಮ್ ಸಾಹಿತ್ಯ, ರಮೇಶ್ ನೃತ್ಯ ನಿರ್ದೇಶನ, ವಿನೋದ್, ಕುಂಗ್ಪೂಚಂದ್ರು ಸಾಹಸ, ಕೆ.ಗಿರೀಶ್ ಕುಮಾರ್ ಸಂಕಲನವಿದೆ. ಸುಮಂತ್ ಶೈಲೇಂದ್ರ, ನಭಾನಟೇಶ್, ಸ್ನೇಹ, ನಮನಂದಿ, ಸಾಧುಕೋಕಿಲ, ರಂಗಾಯಣ ರಘು, ರಾಹುಲ್ದೇವ್, ಜಯಶಂಕರ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ತಬಲನಾಣಿ ಮುಂತಾದವರ ತಾರಾಬಳಗವಿದೆ.